ಕೇಳು ಎದೆಯ ಪ್ರೇಮ ಕವನ

ನೋಡು ಮೌನ ಶಾಂತಿ ಸುಮನ
ಆಳ ಆಳ ಇಳಿದಿದೆ
ಕೇಳು ಎದೆಯ ಪ್ರೇಮ ಕವನ
ಮೇಲೆ ಮೇಲೆ ಏರಿದೆ

ಅಗೋ ಅಲ್ಲಿ ಗಗನದಲ್ಲಿ
ಮೌನ ಮಹಡಿ ಕರೆದಿದೆ
ಇಗೋ ಇಲ್ಲಿ ಮೊರಡಿಯಲ್ಲಿ
ಶಬ್ದ ಕರಡಿ ಮಡಿದಿದೆ

ಬಂತು ಬಂತು ಭಾವ ಗಾನ
ನಿತ್ಯ ಸತ್ಯ ಶಾಶ್ವತಾ
ಆತ್ಮ ವಸ್ತು ಜ್ಯೋತಿ ಶಿಸ್ತು
ಬಾಳ ಚೈತ್ಯ ಭೌಮತಾ

ನಗೆಯ ರಾಣಿ ನಾಗವೇಣಿ
ಮುಗಿಲ ಗಂಗೆ ಸುರಿದಳು
ವಿಮಲ ಅಮಲ ಕಮಲ ರಾಣಿ
ಆತ್ಮ ರಾಣಿ ಎರೆದಳು

ಬಂತು ಬಂತು ಸೊಂಪು ತಂಪು
ಕಂಪು ಹೂವು ಅರಳಿತೋ
ತಲೆಯ ಟೊಳ್ಳು ಟಳ್ಳನೆಂದು
ಜ್ಯೋತಿ ಪುಷ್ಪ ಬಿಚ್ಚಿತೋ

ಓಂ ಶಿವನೆ ಓಂ ಶಾಂತಿ
ಓಂ ಒಲವಿನಮೃತಂ
ಓಂ ಶಾಂತಿ ಓಂ ಶಾಂತಿ
ಓಂ ಮಿಲನ ಶಾಶ್ವತಂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದೇ ಕಥೆ
Next post ನಡು ಬೇಸಗೆ, ಟೊಬಾಗೋ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys